ಗೌರಿ ಗಣೇಶ ಹಬ್ಬಕ್ಕೆ ಕನ್ನಡ ಚಿತ್ರರಂಗದಲ್ಲಿ ಥಿಯೇಟರ್ಗೆ ಲಗ್ಗೆ ಇಟ್ಟಿರುವ ಸಿನಿಮಾ 'ಇಬ್ಬನಿ ತಬ್ಬಿದ ಇಳೆಯಲಿ'. ರಕ್ಷಿತ್ ಶೆಟ್ಟಿ ಇಷ್ಟ ಪಟ್ಟು ನಿರ್ಮಿಸಿರುವ ಈ ಸಿನಿಮಾ ಹಲವು ಕಾರಣಗಳಿಗೆ ಗಮನ ಸೆಳೆದಿದೆ. ಪ್ರೇಮಿಗಳಂತೂ ಈ ಪ್ರೇಮಕಥೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಹಬ್ಬದ ಸಂಭ್ರಮದಲ್ಲಿ ಪ್ರೀತಿ, ವಿರಹ ಇಷ್ಟ ಪಡುವವರು ಈಗಾಗಲೇ ಥಿಯೇಟರ್ನಲ್ಲಿ ಇರಬಹುದು.